ಮಾಧ್ವ ಯುವ ವೇದಿಕೆ,
(ಶ್ರೀ ಮಾಧ್ವ ಸಂಘ)
ಶ್ರೀ ಉತ್ತರಾದಿ ಮಠ, ಮೈಸೂರು.
--------------------------------------------------------------
ಅಧ್ಯಾತ್ಮ ಬಂಧುಗಳೇ,
ಈ ಹಿಂದೆ, “ಹರಿ-ಸಿರಿ ಸ್ತುತಿ ಸುರಭಿ” ಎಂಬ “ಶ್ರೀ ವಿಷ್ಣು ಸಹಸ್ರನಾಮ” ಹಾಗೂ “ಶ್ರೀ ಲಕ್ಷ್ಮೀ ಶೋಭಾನೆಯ ಕೋಟಿ
ಪಾರಾಯಣ ಯಜ್ಞ”ದ ಸಂಕಲ್ಪ ಸಮಾರಂಭಕ್ಕೆ ತಾವೆಲ್ಲರೂ ಭಾಗವಹಿಸಿ,
ಸಂಕಲ್ಪಿಸಿ, ಸ್ತುತಿಸಿ, ಸರ್ವೋತ್ತಮನಿಗೆ ಸಮರ್ಪಿಸಲು ಸಿದ್ಧರಾಗಿರುವಿರಿ.
ಈ ಪಾರಯಣ ಯಜ್ಞದ ಸಮಾಪ್ತಿಯ ದ್ಯೋತಕವಾಗಿ ಹಾಗೂ ಸಮರ್ಪಣಾ ಸಮಾರಂಭವಾಗಿ
ಜಗದ್ಗುರು ಶ್ರೀ ಮನ್ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ, ಶ್ರೀ ಮದುತ್ತರಾದಿ ಮಠಾಧೀಶರಾದ
ಶ್ರೀ ಶ್ರೀ 1008 ಶ್ರೀ ಸತ್ಯಾತ್ಮತೀರ್ಥ ಶ್ರೀ ಪಾದಂಗಳವರ ದಿವ್ಯ ಸಾನಿಧ್ಯದಲ್ಲಿ,
ಭಕ್ತರಿಗೆ ಕಾಮಧೇನುವಾಗಿ, ಅಭೀಷ್ಟವನ್ನು ಅನುಗ್ರಹಿಸುವ,
ಶ್ರೀ ಶ್ರೀ ಸತ್ಯಸಂಕಲ್ಪತೀರ್ಥ ಶ್ರೀ ಪಾದಂಗಳವರ ಆರಾಧನೆಯ ಪರ್ವಕಾಲದಲ್ಲಿ,
ಮಾಧ್ವ ಯುವ ವೇದಿಕೆಯ ಸಾರಥ್ಯದಲ್ಲಿ, ಮಾಧ್ವ ಸಂಘದ ಸಹಕಾರದೊಂದಿಗೆ
ವನ್ನು ಹಮ್ಮಿಕೊಳ್ಳಲಾಗಿದೆ.
ಭಗವಂತನಿಗೆ ಅತ್ಯಂತ ಪ್ರಿಯವಾದ, ಭಗವಂತನ ಆದೇಶದ ಮೇರೆಗೆ ವಿಶ್ವಾಮಿತ್ರರಿಂದ ಪುನರಾವರ್ತನೆಯಾಗಿ, ಸ್ತುತಿಸಲ್ಪಟ್ಟ, ಋಗ್ವೇದದ ಬೇರೆ ಬೇರೆ ಮಂತ್ರಗಳ ಸಮೂಹವೇ “ಬೃಹತೀ ಸಹಸ್ರ”.
ಬೃಹತೀ ಸಹಸ್ರದ 1000 ಋಕ್ಕುಗಳಲ್ಲಿನ, 72000 ಸ್ವರ ವ್ಯಂಜನಗಳು, ಪಿಂಡಾಂಡದಲ್ಲಿನ (ಮನುಷ್ಯನ ದೇಹ) 72000 ನಾಡಿಗಳನ್ನು ಪ್ರತಿಬಿಂಬಿಸುವ 72000 (36000 ಪುರುಷ ಹಾಗೂ ಸ್ತ್ರೀ ರೂಪಗಳು) ಭಗವಂತನ ರೂಪಗಳ ಸ್ತುತಿಯಾಗಿ, ಮನುಷ್ಯನ ಆಂತರಿಕ ಆರೋಗ್ಯವನ್ನು ವೃದ್ಧಿಸುತ್ತದೆ. ಅಲ್ಲದೆ ಪ್ರಕೃತಿಯಲ್ಲಿನ 36000 ಹಗಲು ಮತ್ತು 36000 ರಾತ್ರಿಗಳನ್ನು ಪ್ರತಿಬಿಂಬಿಸುವ ಮೂಲಕ, ಮನುಷ್ಯನಿಗೆ 100 ವರ್ಷ (100ವರ್ಷ= 36000 ದಿನಗಳು) ಆಯಸ್ಸನ್ನು ಅನುಗ್ರಹಿಸುವ ಯಜ್ಞನಾಮಕ ಪರಮಾತ್ಮನ ಅಭಿನ್ನ ರೂಪವೇ, ಈ ಯಜ್ಞ.
ಇಂತಹ ಯಜ್ಞದಲ್ಲಿ ಪಾಲ್ಗೊಳ್ಳಿ, ಕೃತಾರ್ಥರಾಗಿ,
ಮಾರ್ಗರ್ಶನ-ಪಂ. ಶ್ರೀ ಸತ್ಯಧ್ಯಾನಾಚಾರ್ಯ ಕಟ್ಟಿ, ಪ್ರಾಂಶುಪಾಲರು, ಶ್ರೀ ಜಯತೀರ್ಥ ವಿದ್ಯಾಪೀಠ, ಶ್ರೀ ಉತ್ತರಾದಿ ಮಠ, ಬೆಂಗಳೂರು.
ನೇತೃತ್ವ- ಎಸ್. ಎ. ರಾಮದಾಸ್, ಶಾಸಕರು ಹಾಗೂ ಮಾನ್ಯ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಗಳು, ಕರ್ನಾಟಕ ಸರ್ಕಾರ.
ಕಾರ್ಯಕ್ರಮದ ಪಕ್ಷಿನೋಟ :
ದಿನಾಂಕ 5 ನೇ ಜುಲೈ 2009 (ಭಾನುವಾರ)
ಬೆಳಿಗ್ಗೆ-ಕಲಶ ಸ್ಥಾಪನ, ಅಗ್ನಿ ಪ್ರತಿಷ್ಠಾಪನ, ಹೋಮ ಪ್ರಾರಂಭ, ಸಂಸ್ಥಾನ ಪೂಜಾ, ತೀರ್ಥಪ್ರಸಾದ
ಸಾಯಂಕಾಲ-ಪಂಡಿತರಿಂದ ಪ್ರವಚನ ಹಾಗೂ ವಿಚಾರಗೋಷ್ಠಿ, ಶ್ರೀ ಶ್ರೀಗಳವರಿಂದ ಆಶೀರ್ವಚನ
ದಿನಾಂಕ 6ನೇ ಜುಲೈ 2009 (ಸೋಮವಾರ)
ಕೋಟಿ ಪಾರಾಯಣ ಸಮರ್ಪಣಾ, ಪೂರ್ಣಾಹುತಿ
ದಿನಾಂಕ 7ನೇ ಜುಲೈ2009 (ಮಂಗಳವಾರ)
ಶ್ರೀ ಶ್ರೀ ಸತ್ಯಸಂಕಲ್ಪತೀರ್ಥ ಶ್ರೀಪಾದಂಗಳವರ ಆರಾಧನಾ
--------------------
ಸಂಸ್ಥಾನ ಪೂಜೆ ಹಾಗೂ ತೀರ್ಥ ಪ್ರಸಾದ,
ಸಾಮೂಹಿಕ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ಕೋಟಿ ಪುಷ್ಪಾರ್ಚನೆ ಹಾಗೂ ಸಾಮೂಹಿಕ ಭಜನೆ.
ಸಾಮೂಹಿಕ ಲಕ್ಷ್ಮೀಶೋಭಾನ ಪಠಣ, ಶ್ರೀ ಲಕ್ಷ್ಮೀನಾರಾಯಣ ಪೂಜೆ ಹಾಗೂ ಬಾಗಿನ ಸಮರ್ಪಣೆ.
ಭಗವಂತನ ಉತ್ಸವದೊಂದಿಗೆ, ಪ್ರದಕ್ಷಿಣಾ ನಮಸ್ಕಾರ.
ಪ್ರತಿ ದಿನ ಸುಪ್ರಸಿದ್ಧ ವಿದ್ವಾಂಸರುಗಳಿಂದ ಪ್ರವಚನ ಹಾಗೂ ವಿಚಾರ ಗೋಷ್ಠಿ, ಶ್ರೀ ಶ್ರೀಗಳವರಿಂದ ಆಶೀರ್ವವಚನ
ಸಾರ್ಥಕ ಸುಮ ಸಮರ್ಪಣಾ (ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಹಸ್ತ).
ಪರಾತ್ಪರನ ದರ್ಶನ, ಪರಮಹಂಸರ ಸಂದರುಶನ, 9 ಕೋಟಿ ಮಂತ್ರಗಳ ಜಪದಿಂದ ಬರುವ ಪುಣ್ಯ ವಿಶೇಷದ ಸಂಪಾದನೆಗಾಗಿ, ಸಕಲ ಅಭೀಷ್ಟ ಪ್ರಾಪ್ತಿಗಾಗಿ ಸಕಲ ಪಾಪಗಳ ಪರಿಹಾರಾರ್ಥವಾಗಿ ಒದಗಿ ಬಂದಿರುವ ಈ ಸುಸಂದರ್ಭದಲ್ಲಿ ನಾವೆಲ್ಲರೂ ಭಾಗಿಯಾಗೋಣ.
ಸೇವಾ ವಿವರ ಮೊತ್ತ
ತುಲಾಭಾರ -10,000/-
ಆರಾಧನಾ ಸರ್ವ ಸೇವಾ- 5,000/-
ಸಾಮೂಹಿಕ ಯತಿ ಭಿಕ್ಷಾ -2,000/-
ಬೃಹತೀ ಯಜ್ಞ ಕಲಶ ಸೇವಾ- 250/-
ಕೋಟಿ ಯಜ್ಞ ಪುಷ್ಪಾರ್ಚನೆ- 100/-
ದ್ರವ್ಯರೂಪದಲ್ಲೂ ಸೇವೆಯನ್ನು ಸಲ್ಲಿಸಬಹುದು.
ಸೇವೆಯನ್ನು ಸಮರ್ಪಿಸುವವರು ಶ್ರೀ ಎಸ್.ಎಸ್. ರವಿ-9916281972 ಯವರನ್ನು ದಯಮಾಡಿ ಸಂಪರ್ಕಿಸಿ.
ವೇದಿಕೆಯಿಂದ ಸ್ವೀಕರಿಸಿದ ಹುಂಡಿಯನ್ನು ಸಮರ್ಪಿಸಲು ದಯಮಾಡಿ ವೇದಿಕೆಯ ಕಾರ್ಯಕಾರಿಣಿ. ಸದಸ್ಯರನ್ನು ಸಂಪರ್ಕಿಸಿ, ಅಧಿಕೃತವಾದ ರಸೀದಿಯನ್ನು ಪಡೆಯಬೇಕಾಗಿ ವಿನಂತಿ.
ಹುಂಡಿಯನ್ನು ಸಮರ್ಪಿಸುವಾಗಿ ತಮ್ಮ ಹೆಸರು, ಗೋತ್ರ, ನಕ್ಷತ್ರಗಳನ್ನು ತಪ್ಪದೇ ನೀಡಬೇಕಾಗಿ ವಿನಂತಿ.
ಹೆಚ್ಚಿನ ಮಾಹಿತಿ ಹಾಗೂ ಹುಂಡಿಯ ಸಮರ್ಪಣೆಗೆ ಸಂಪರ್ಕಿಸಿ:
ಶ್ರೀ ಗುರುಪ್ರಸಾದ್-9844076899 ಶ್ರೀ ಪಿ.ಎನ್.ಭಾನು ಪ್ರದೀಪ್ ಪಾಂಡುರಂಗಿ-9880248292
ಶ್ರೀ ಎಸ್.ಎಸ್.ರವಿ-9916281972 ಶ್ರೀ ಮದುಸೂಧನ್-9008712056
ಶ್ರೀ ಗಿರಿಧರ್-9342443331 ಶ್ರೀ .ಕೆ.ಪಿ ಮಧುಸೂದನ್ -9986188436
ಶ್ರೀ ಮಧ್ವೇಶ್ ಮನ್ನಾರಿ-9448390749 ಶ್ರೀ ಕೃಷ್ಣ ಸುಧಿ-9880546668
ಶ್ರೀ ಆನಂದ-9342420995 ಶ್ರೀ ವಿಜಯೀಂದ್ರ ನಾಯಕ್-9448601751
ಶ್ರೀ ಪಿ.ರಾಘವೇಂದ್ರ. -9480491478 ಶ್ರೀ ಗಿರೀಶ್-9900251453
ಶ್ರೀ ಸಂಜೀವ-9901668921 ಶ್ರೀ ಕೀರ್ತಿನಾರಾಯಣ್-9880046471
ಶ್ರೀ ಸುಧಾಕರ್-0821-2485425
E-mail: madhwayuvavedike@yahoo.co.in
madhwayuvavedike@gmail.com
website: www.madhwayuvavedike.blogspot.com